ರಾಯಚೂರು (ಮುದಗಲ್):
ಅವರು ಹೋಗಿದ್ದು ಸಂಬಂದಿಕರ ಮದುವೆ ಕಾರ್ಯಕ್ರಮಕ್ಕೆ,ಆದರೆ ಸೇರಿದ್ದು ಮಾತ್ರ ಮಸಣಕ್ಕೆ!ಬುಲೋರೊಗಾಡಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದರಿಂದ ಬೇಕ್ ಸವಾರ ಮತ್ತು ಹಿಂಬದಿಯಲ್ಲಿದ್ದ ಮಹಿಳೆ ಸವಾರನ ಮಡದಿ ಸ್ಥಳದಲ್ಲಿಯೇ ಸಾವಿಗಿಡಾದ ಘಟನೆ ಲಿಂಗಸುಗೂರು ತಾಲೂಕಿನ ಮುದಗಲ್ತಾ ಮತ್ತ ತಾವರಗೇರಾ ಮುಖ್ಯ ರಸ್ತೆಯ ಹಾಲಬಾವಿ ಶ್ರೀವೀರಬದ್ರೇಶ್ವರ ದೇವಸ್ಥಾನ ಸಮೀಪ ಶುಕ್ರವಾರ ಜರುಗಿದೆ.
ಮೃತರು ಲಿಂಗಸೂಗೂರ ತಾಲ್ಲೂಕಿನ ಹಟ್ಟಿ ಚಿನ್ನದಗಣಿ ಸಮೀಪದ ಮಲ್ಲಾಪೂರು ಗ್ರಾಮದ ಬೈಕ್ ಸವಾರ ಶಿವಬಸವ (37) ಹೊನ್ನಮ್ಮ ( 33) ಎಂದು ಹೇಳಲಾಗುತ್ತಿದೆ. ವೇಗವಾಗಿ ಬುಲೋರಗಾಡಿ ಬೈಕ್ ಸವಾರನ ತಲೆಗೆ ಡಿಕ್ಕಿಹೊಡೆದಿದ್ದರಿಂದ ಮೃತ ಬೈಕ್ ಸವಾರನ ತಲೆ ಛಿದ್ರಗೊಂಡು ವ್ಯಕ್ತಿಯ ಗುರುತು ಹಿಡಿಯದಂತಾಗಿತ್ತು. ಮೃತರು ತಾವರಗೇರಾದಲ್ಲಿ ಸಂಬಂದಿಕರ ಮದುವೆಗೆ ಹೋಗಿದ್ದರು.ವಾಪಾಸ್ ಮರಳುವಾಗ ಅಪಘಾತದಲ್ಲಿ ಸಾವಿಗಿಡಾಗಿದ್ದು ವಿಪರ್ಯಾಸ . ಸ್ಥಳಕ್ಕೆ . ರಾಯಚೂರು ಜಿಲ್ಲಾ ಹೆಚ್ಚುವರಿ
ಪೊಲೀಸ್ ಅಧಿಕಾರಿ ಶಿವಕುಮಾರ, ಹಾಗೂ ಸ್ಥಳಿಯ ಪಿಎಸೈ. ಸದ್ದಾಂ ಹುಸೇನ್ ಕ್ರೈಂ.ಪಿಎಸೈ.ಮಲ್ಲಪ್ಪ,ಸಿಬ್ಬಂದಿ ಅಮರೇಶ ಬೇಟಿ,ಹನುಮಂತ ಕಂಬಳಿ ಬೇಟಿ ನೀಡಿ ಬುಲೋರ ಗಾಡಿ ವಶಕ್ಕಕೆ ಪಡೆದಿದ್ದು ಚಾಲಕ ಪರಾರಿಯಾಗಿದ್ದಾನೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.