This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

international NewsNational NewsState News

ಕೇಂದ್ರ ಮಂತ್ರಿ ನಿತಿನ್ ಗಡ್ಕರ್ ಆರೋಗ್ಯದಲ್ಲಿ ಏರುಪೇರು


ಪಶ್ವಿಮ ಬಂಗಾಳ: ಕೇಂದ್ರ ಸಚಿಚ ನಿತಿನ್ ಗಡ್ಕರಿ ಆರೋಗ್ಯದಲ್ಲಿ ಅಸ್ವಸ್ಥರಾಗಿರುವ ಘಟನೆ ಸಿಲಿಗುರಿಯಲ್ಲಿ ಜರುಗಿದೆ.

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಸಿಲಿಗುರಿಯಲ್ಲಿ ದಗಾಪುರ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದರು. ಈ ವೇಳೆ ವೇದಿಕೆಯಲ್ಲಿ ಕುಳಿತಿರುವಾಗಲೇ ವೇದಿಕೆಯಲ್ಲಿ ಅಸ್ವಸ್ಥರಾಗಿದ್ದಾನೆ ಎನ್ನಲಾಗುತ್ತಿದೆ. ಅವರ ಆರೋಗ್ಯದಲ್ಲಿ ಸಕ್ಕರೆ ಮಟ್ಟವು ಕಡಿಮೆಯಾಗಿದ್ದ ಪರಿಣಾಮ ಆರೋಗ್ಯದಲ್ಲಿ ತೊಂದರೆಯಾಗಿತ್ತು. ಕೂಡಲೇ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಯಿತು, ಬಳಿಕ ಲವಣಾಂಶವನ್ನು ನೀಡಿ, ತಕ್ಷಣವೇ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸರ್ಕಾರದ ಯೋಜನೆಗಳನ್ನು ಉದ್ಘಾಟಿಸಲು ನಿತಿನ್ ಗಡ್ಕರಿ ಕಾರ್ಯ್ರಕದಲ್ಲಿ ಭಾಗವಹಿಸಿದರು. 1206 ಕೋಟಿ ರೂಪಾಯಿ ವೆಚ್ಚದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದರು. ಈ ಸಮಾರಂಭ ನಡೆಯುತ್ತಿರುವಾಗಲೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಇದಾದ ಬಳಿಕ ಸುಕ್ನಾ ಪ್ರಾಥಮಿಕ ಆರೋಗ್ಯದ ಕೇಂದ್ರದ ತಂಡ ಆಗಮಿಸಿ ಚಿಕಿತ್ಸೆ ನೀಡಲಾಯಿತು.

ಇನ್ನೂ ಈ ಹಿಂದೆ ಕಾರ್ಯಕ್ರಮದ ವೇಳೆ ಗಡ್ಕರಿಯವರಿಗೆ ಆರೋಗ್ಯ ಏರುಪೇರು ಆಗಿತ್ತು. ಕಾರ್ಯಕ್ರಮ ನಡೆಯುವ ವೇಳೆ ನಿತಿನ್ ಗಡ್ಕರಿ ಅವರ ಆರೋಗ್ಯದಲ್ಲಿ ತೊಂದರೆ ಆಗಿರುವುದು ಇದೇ ಮೊದಲ ಬಾರಿಗೆ ಅಲ್ಲ. 2018ರ ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಅಹ್ಮದ್ನಗರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರಿಗೆ ಆರೋಗ್ಯದಲ್ಲಿ ತೊಂದರೆಯಾಗಿತ್ತು. ಗಡ್ಕರಿ ವೇದಿಕೆಯ ಮೇಲೆ ಪ್ರಜ್ಞೆ ತಪ್ಪಿದ್ದರು. ಬಳಿಕ ಗಡ್ಕರಿಯವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರದ ಅಂದಿನ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಇದ್ದರು.

 

 


Kalyana Voice Desk