![](https://kalyanavoice.com/yfotimpa/2023/06/Screenshot_20230619_162357.jpg)
ಕಾಡಾನೆ ಜೊತೆ ಸೆಲ್ಫಿಗಾಗಿ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಘಟನೆ ತಮಿಳುನಾಡು-ಕರ್ನಾಟಕ ಗಡಿಯ ಆಸನೂರು ಬಳಿ ನಡೆದಿದೆ.ರಸ್ತೆಯ ಪಕ್ಕ ತನ್ನ ಪಾಡಿಗೆ ತಾನು ಹೊರಟಿದ್ದ ಸಲಗಕ್ಕೆ ಯುವಕನೋರ್ವ ಸುಮ್ಮನಿರದೆ ಕಾರಿನಿಂದ ಇಳಿದು ಫೋಟೋಗಾಗಿ ಆನೆ ಹಿಂದೆ ಹೆಜ್ಜೆ ಹಾಕಿದ್ದಾನೆ. ಆನೆ ವಾಪಸ್ ಆಗುತ್ತಿದ್ದಂತೆ ಕಾರು ಏರಿ ಯುವಕ ಪ್ರಾಣ ಉಳಿಸಿಕೊಂಡಿದ್ದಾನೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಯುವಕ, ಕೇವಲ ಸೆಲ್ಫಿಗಾಗಿ ತನ್ನ ಜೀವಕ್ಕೆ ಸಂಚಕಾರ ತಂದುಕೊಂಡಿದ್ದ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.