![](https://kalyanavoice.com/yfotimpa/2023/10/InCollage_20231011_082933824-scaled.jpg?v=1696993212)
ರಾಯಚೂರು ( ದೇವದುರ್ಗ ) : ಹಾಸ್ಟೆಲ್ ಛತ್ತು ಉರುರಿಬಿದ್ದು ಇಬ್ಬರು ಅಡುಗೆ ಸಿಬ್ಬಂದಿಗೆ ಗಂಭೀರ ಗಾಯವಾದ ಘಟನೆ ದೇವದುರ್ಗ ಪಟ್ಟಣದ ಪರಿಶಿಷ್ಟ ಪಂಗಡ ಪೋಸ್ಟ್ ಮೆಟ್ರಿಕ್ ವಸತಿ ನಿಲಯದಲ್ಲಿ ನಡೆದಿದೆ.
ಮೇಲ್ಚಾವಣಿ ಕುಸಿದು ಇಬ್ಬರು ಅಡುಗೆ ಸಹಾಯಕರಿಗೆ ಗಂಭೀರ ಗಾಯವಾಗಿದೆ. ಅಡುಗೆ ಸಹಾಯಕಿ ಶಿವಮ್ಮ (55), ಲಕ್ಷ್ಮೀ (45) ಗೆ ಗಾಯಗೊಂಡವರು.
ಗಾಯಾಳುಗಳನ್ನು ಚಿಕಿತ್ಸೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸ್ಟೆಲ್ ವಾರ್ಡನ್ ಬಸವರಾಜ ಹಾಗೂ ತಾಲ್ಲೂಕು ಅಧಿಕಾರಿ ರಾಘವೇಂದ್ರ ರಾವ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೊಸ ಕಟ್ಟಡದಲ್ಲೇ ಛತ್ತು ಉದುರಿ ಬಿದ್ರಿಂದ ಕಳಪೆ ಕಾಮಗಾರಿ ಶಂಕೆಯೂ ಸಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.