This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Entertainment NewsState News

KSCA ಅಂಡರ್-16 ರಾಯಚೂರು ತಂಡಕ್ಕೆ ಆಯ್ಕೆ ಲಿಂಗಸುಗೂರು ಹುಡುಗರ ಸಾಧನೆಗೆ ಮೆಚ್ಚುಗೆ


ರಾಯಚೂರು (ಲಿಂಗಸುಗೂರು):

ದಿನಾಂಕ 22-06-2024 ರಂದು ರಾಯಚೂರಿನಲ್ಲಿ ನಡೆದ KSCA ಅಂಡರ್-16 ಆಯ್ಕೆ ಟ್ರಯಲ್ಸ್ ನಲ್ಲಿ ಭಾಗವಹಿಸಿದ್ದ ಲಿಂಗಸುಗೂರಿನ ಪ್ರತಿಭಾವಂತ ಇಬ್ಬರು ಆಟಗಾರರು ರಾಯಚೂರು ತಂಡಕ್ಕೆ ಆಯ್ಕೆಯಾಗಿದ್ದಾರೆ.

ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಒಟ್ಟು 83 ಆಟಗಾರರು ವಿವಿಧ ಕ್ಲಬ್ ಗಳಿಂದ ಆಯ್ಕೆ ಟ್ರಯಲ್ಸ್ ನಲ್ಲಿ ಪಾಲ್ಗೊಂಡಿದ್ದರು.

ಸಮರ್ಥ್ ನಾಗಾರಾಜ ಸಾಲ್ಮನಿ ಮತ್ತು ಸಂಜಿತ್ ವಿಜಯಕುಮಾರ್ ಆಯ್ಕೆ ಆಗಿರುವ ಪ್ರತಿಭಾವಂತ ಆಟಗಾರರು.
ವಿಶೇಷವೆಂದರೆ ಇಬ್ಬರೂ ಆಟಗಾರರು ಎಡಗೈ ದಾಂಡಿಗರಾಗಿದ್ದಾರೆ.
ಸಮರ್ಥ ಎಡಗೈ ಮದ್ಯಮ ವೇಗದ ಬೌಲರ್ ಆಗಿದ್ದು ಮಧ್ಯಮ ಕ್ರಮಾಂಕದಲ್ಲಿ ಚುರುಕಾಗಿ ಬ್ಯಾಟ್ ಬೀಸುತ್ತಾರೆ. ಸಂಜೀತ್ ಆರಂಬಿಕ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ಉಪಯುಕ್ತ ಎಡಗೈ ಆಫ್ ಸ್ಪಿನ್ನರ್ ಆಗಿದ್ದಾರೆ.
ಈ ಇಬ್ಬರೂ ಈಗಾಗಲೇ ಅನೇಕ ಕ್ಲಬ್ ಪಂದ್ಯಗಳಲ್ಲಿ ಸಾಕಷ್ಟು ಅತ್ಯುತ್ತಮ ಪ್ರದರ್ಶನ ತೋರಿದ್ದು ಅವರ ಭವಿಷ್ಯದ ಕುರಿತು ತುಂಬಾ ನಿರೀಕ್ಷೆ ಇದೆ ಎಂದು ಅವರ ಐದು ವರ್ಷಗಳ ಕೋಚ್ ಗಳಾದ ಆಹ್ಮದ್ ಮತ್ತು ಅಜ್ಮೀರ್ ಹೇಳುತ್ತಾರೆ.
ಈಗಾಗಲೇ ಲಿಂಗಸುಗೂರು ಕ್ರಿಕೆಟ್ ಕ್ಲಬ್ ಹೆಸರಿನ ತರಬೇತಿ ಶಾಲೆಯಿಂದ ನಾಲ್ಕಕ್ಕೂ ಹೆಚ್ಚು ಆಟಗಾರರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.
ಬೆಂಗಳೂರಿನಲ್ಲಿ ಝೋನ್ ಆಟಗಾರನಾಗಿ ಮಿಂಚುತ್ತಿರುವ ಕಾರ್ತಿಕ್ ನಾಯಕ ಇದೇ ಕ್ಲಬ್ ನ ಆಟಗಾರನಾಗಿದ್ದಾನೆ ಎಂಬುದು ವಿಶೇಷವಾಗಿದೆ.