ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಸಂಬಂಧಪಟ್ಟ ನಾನಾ ವಿಚಿತ್ರ, ವಿಶೇಷ, ವಿಭಿನ್ನ ಪ್ರಸಂಗಗಳು ನಡೆಯುತ್ತಿವೆ. ಇಂದೂ ಸಹ ರಾಯಚೂರು ನಗರದಲ್ಲಿ ಬಸ್ ಕಂಡಕ್ಟರ್ ಒಬ್ಬರು ಶಕ್ತಿ ಯೋಜನೆ ಬಗ್ಗೆ ಹಾಡು ಹಾಡುತ್ತಾ ಟಿಕೆಟ್ ಕೊಡುಬ ದೃಷ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ನಿರ್ವಾಹಕ ಗುರು ದೇವರಮನಿ ( ಜ್ಯೂನಿಯರ್ ಡಾ ರಾಜಕುಮಾರ ) ಅವರು ಎಲ್ಲಾದರು ಇರು ಎಂತಾದರೂ ಇರು.. ಎಂದೆಂದಿಗೂ ನೀ ಫ್ರೀ ಬಸ್ ಪ್ರಯಾಣ ಮಾಡ್ತಿರು ಎಂದು ಪ್ರಯಾಣಿಕರಿಗೆ ಮನರಂಜನೆ ನೀಡುತ್ತಾ ಸಾಗಿದರು.
Kalyana Voice > Entertainment News > ಹಾಡು ಹಾಡುತ್ತಾ ಟಿಕೆಟ್ ನೀಡುವ ರಾಯಚೂರಿನ ಬಸ್ ಕಂಡಕ್ಟರ್.! ವೀಡಿಯೋ ವೈರಲ್.