![](https://kalyanavoice.com/yfotimpa/2022/10/Cong-RahulGandhi-1.jpg)
ರಾಯಚೂರು: ನೆಹರು ಗಾಂಧಿ ಫ್ಯಾಮಿಲಿಯ ಸದಸ್ಯರೊಬ್ಬರು ಮೊಟ್ಟಮೊದಲ ಬಾರಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಮಾಡಿದ್ದಾರೆ.
ಭಾರತ ಜೋಡೋ ಯಾತ್ರೆ ನಡೆಸುತ್ತಿರುವ ರಾಹುಲ್ಗಾಂಧಿ ಗುರುವಾರದಂದು ಸಂಜೆ ಗುರುರಾಯರ ದರ್ಶನ ಮಾಡಿದ್ದಾರೆ.
ಮೊಟ್ಟಮೊದಲ ಬಾರಿಗೆ ಮಂತ್ರಾಲಯಕ್ಕೆ ಆಗಮಿಸಿದ ರಾಹುಲ್ಗಾಂಧಿಗೆ ಶ್ರೀಮಠದಿಂದ ಸಂಪ್ರದಾಯಕವಾಗಿ ಬರಮಾಡಿಕೊಂಡರು. ಮೊದಲಿಗೆ ಗ್ರಾಮದ ಆದಿದೇವತೆ ಶ್ರೀಮಂಚಾಲಮ್ಮ ದೇವಿಗೆ ದರ್ಶನ ಪಡೆದು, ಮಂಗಳಾರತಿ ಮಾಡುವ ಮೂಲಕ ವಿಶೇಷ ಪೂಜೆ ನೇರವೇರಿಸಿದರು.
ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದುಕೊಂಡು, ಮಂಗಳಾರತಿ ನೇರವೇರಿಸಿದರು. ಬಳಿಕ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಭೇಟಿ ಮಾಡಿದರು. ಈ ವೇಳೆ ಪೀಠಾಧಿಪತಿಗಳು ರಾಯರ ಮಠವನ್ನು ವಿಡಿಯೋ ತೋರಿಸಲಾಯಿತು. ನಂತರ ಶ್ರೀಮಠದಿಂದ ಸನ್ಮಾನಿಸಿ, ಗೌರವಿಸಲಾಯಿತು.
ರಾಯರ ಭೇಟಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಸೇರಿದಂತೆ ಇತರ ಮುಖಂಡರು ಸಾಥ್ ನೀಡಿದರು.
ರಾಯರ ದರ್ಶನ ಪಡೆಯುವ ಹಿನ್ನಲೆಯಲ್ಲಿ ರಾಹುಲ್ಗಾಂಧಿ ಲುಂಗಿ, ಟವಲ್ ಉಡುಪು ತೋಟಿದ್ದರು.