![](https://kalyanavoice.com/yfotimpa/2023/09/IMG_20230929_091652-1.jpg?v=1695964558)
ರಾಯಚೂರು : ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕಾವೇರಿಗಾಗಿ ಪ್ರತಿಭಟನೆ ನಡೆದಿದೆ. ಮಹಾವೀರ ವೃತ್ತ ಬಳಿಯ ಕಂದಗಡ್ಡೆ ಮಾರೆಮ್ಮ ದೇವಸ್ಥಾನ ಬಳಿ ಪ್ರತಿಭಟನೆ ನಡೆದಿದ್ದು, ಖಾಲಿ ಬಿಂದಿಗೆ ಹಿಡಿದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ರಾಯಚೂರು ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಜೈನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮಗಾವೀರ ವೃತ್ತದ ಬಳಿಯ ಮಾರೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಬುದ್ಧಿ ನೀಡಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಅಶೋಕ್ ಕುಮಾರ್ ಜೈನ್, ರಾಜ್ಯದ ೨೫ ಸಂಸದರಿಗೆ ನಾಚಿಕೆಯಾಗಬೇಕು.
ಪ್ರಧಾನಿ ಮೋದಿ ಮನೆ ಮುಂದೆ ಇವರು ಪ್ರತಿಭಟನೆ ಮಾಡಬೇಕು. ಈ ಎಲ್ಲಾ ಸಂಸದರನ್ನು ನಾವು ಯಾಕೆ ಆಯ್ಕೆ ಮಾಡಿದ್ದೀವಿ.? ದಿವಂಗತ ಬಂಗಾರಪ್ಪ ತೆಗೆದುಕೊಂಡಿದ್ದ ಸುಗ್ರೀವಾಜ್ಞೆ ಸಿದ್ದರಾಮಯ್ಯ ಹೊರಡಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಜೈನ್ ಆಕ್ರೋಶ ವ್ಯಕ್ತಪಡಿಸಿದರು.