This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Entertainment NewsState News

ಕೆಜಿಎಫ್ ಚಿತ್ರ ಖ್ಯಾತಿ: ಕೆಜಿಎಫ್ ತಾತಾ ಇನ್ನಿಲ್ಲ


ಬೆಂಗಳೂರು: ಸ್ಯಾಂಡಲ್ ಸೂಪರ್ ಹಿಟ್ ಚಿತ್ರ ಕೆಜಿಎಫ್-2ನಲ್ಲಿ ಕುರುಡ ಮುದುಕನ ಪಾತ್ರ ಅಭಿನಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ನಿಧನವಾಗಿದ್ದಾರೆ.

ಕಳೆದ ಡಿಸೆಂಬರ್ 1ರಂದು ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರು ಎಳೆದಿದ್ದಾರೆ.  ಸೀತಾ ಸರ್ಕಲ್ ಹತ್ತಿರದ ವಿನಾಯಕ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿದ್ದು, ತೀವ್ರ ನಿಗಾಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ.

ಕೆಜಿಎಫ್ ಮೂವಿಯಲ್ಲಿ ನಟಿಸಿದ ಕೃಷ್ಣ ಜಿ.ರಾವ್ ಕೆಜಿಎಫ್ ತಾತಾ ಎಂದು ಖ್ಯಾತಿ ಪಡೆದುಕೊಂಡಿದ್ದರು. ಅಲ್ಲದೇ ಹಿರಿಯ ನಟರಾಗಿದ್ದ ಕೃಷ್ಣ ಜಿ ರಾವ್ ಈ ಹಿಂದೆ ಅಷ್ಟೇ ಕೆಮಿಸ್ಟ್ರೀ ಆಫ್ ಕರಿಯಪ್ಪ ಚಿತ್ರದಲ್ಲಿ ಸಾರಥಿ ಕುಮಾರ್ ನಿರ್ದೇಶದ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಕೆಜಿಎಫ್ ಸಿನಿಮಾ ಬಳಿಕ ಕೃಷ್ಣ ಜಿ.ರಾವ್ ರವರಿಗೆ ಹಲವು ಅವಕಾಶಗಳು ಬಂದಿದ್ದವು. ಇದೀಗ ಇಂತಜ ಚಿತ್ರದ ಜೊತೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿಯೂ ಅವಕಾಶ ಒದಗಿತ್ತು. ಕೆಜಿಎಫ್-2 ಬಿಡುಗಡೆಯ ಬಳಿಕ 15 ಚಿತ್ರದಲ್ಲಿ ನಟನೆ ಮಾಡಿದ್ದರು.