![](https://kalyanavoice.com/yfotimpa/2024/01/25-01.Shrinivas-Eganuru.jpg?v=1706198840)
ರಾಯಚೂರು: ಜಿಲ್ಲೆಯ ಚಿಕ್ಕ ಸೂಗೂರು ಗ್ರಾಪಂ.ಸದಸ್ಯ ಹಾಗೂ ಏಗನೂರು ಪ್ರಾಥಮಿಕ ಕೃಷಿ ಪತ್ತಿನ ಸಂಘದ ನಿರ್ಧೇಶಕರಾಗಿರುವ ಶ್ರೀನಿವಾಸ ಏಗನೂರು ರವರು ಗೌರವ ಡಾಕ್ಟರೆಟ್ ಪದವಿಗೆ ಆಯ್ಕೆಯಾಗಿದ್ದಾರೆ.
ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಮತ್ತು ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ದಿಂದ ಕೊಡ ಮಾಡಲಾಗುವ ಗೌರವ ಡಾಕ್ಟರೆಟ್ ಚೆನೈದಲ್ಲಿ ಜ.27 ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ವೇಧಿಕೆಯಲ್ಲಿ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುವದು ಎಂದು ಯುನಿವರ್ಸಿಟಿಯ ಆಯ್ಕೆ ಕಮಿಟಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಮತ್ತು ಕುರಿ ಉಣ್ಣೆ ಉತಾದಕರ ಸಹಕಾರ ಸಂಘ,ರೈತ ಉತ್ಪಾದಕರ ಕಂಪನಿಯ ಮುಖ್ಯಸ್ಥರಾಗಿ ಅನೇಕ ಸಮಾಜ ಸೇವೆ ಮಾಡಿರುವ ಶ್ರೀನಿವಾಸ ಏಗನೂರುರವರಿಗೆ ಗೌರವ ಡಾಕ್ಟರೆಟ್ ಲಭಿಸಿರುವದಕ್ಕೆ ಕನಕ ಗುರುಪೀಠದ ಶ್ರೀಸಿದ್ದರಾಮನಂದ ಸ್ವಾಮಿಗಳು ಸೇರಿ ಅನೇಕ ಮುಖಂಡರು ಅಭಿನಂದನೆ ತಿಳಿಸಿದ್ದಾರೆ.