![](https://kalyanavoice.com/yfotimpa/2023/10/InCollage_20231019_191858994-scaled.jpg?v=1697723412)
ರಾಯಚೂರು ( ಮಸ್ಕಿ ) :
ನೀರಾವರಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಶಾಸಕ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಬೈದಿದ್ದಾರೆ. ತಿಕ್ಕ ಸೂ…ಮಗನೆ.. ನಿಮಗೆ ರೈತರ ಕೈಯಿಂದ ಚಪ್ಪಲಿಯಿಂದ ಹೊಡೆಸುತ್ತೇನೆ ಎಂದು ಶಾಸಕ ಅಸಂಬದ್ಧ ಪದ ಬಳಕೆ ಮಾಡಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆ ಅಧಿಕಾರಿಗಳಿಗೆ ಕೆಟ್ಟ ಪದ ಬಳಸಿ ವಾಗ್ದಾಳಿ ನಡೆಸಿದ್ದು,
ತುಂಗಭದ್ರಾ ಎಡದಂಡೆ ಕಾಲುವೆ ಸಿರವಾರ ವಿಭಾಗ ಇಇ ಸತ್ಯನಾರಾಯಣ ಶೆಟ್ಟಿ ಹಾಗೂ ಎಇಇ ವಿಜಯಲಕ್ಷ್ಮಿ ಪಾಟೀಲ್ ಮೇಲೆ ಶಾಸಕ ದದ್ದಲ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಯಾಕೆ ನಿಂದಿಸಿದ್ದು ?
ಟಿ ಎಲ್ ಬಿ ಸಿ 7 ಕಡೆ ಡಿಸ್ಟ್ರಿಬೂಟರ್ ಗೇಟ್ ಮುರಿದಿದ್ರಿಂದ ರೈತರಿಗೆ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಗೇಟ್ ಮುರಿದು ಇಷ್ಟೂ ದಿನವಾದ್ರೂ ದುರಸ್ಥಿ ಮಾಡಿಲ್ಲ ಎಂದು ಗರಂ ಆಗಿದ್ದಾರೆ. TLBC ಕೊನೆ ಭಾಗದ ರೈತರಿಗೆ ನೀರು ತಲುಪದೇ ಇದ್ರಿಂದ ಅಕ್ಷರಶಃ ಶಾಸಕ ದದ್ದಲ್ ಕೆಂಡಾಮಂಡಲರಾಗಿದ್ದಾರೆ