This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

State News

ಶರಣಬಸವರಾಜ ರವರಿಗೆ ಒಲಿದು ಬಂದ ಗೌಡಾ ಪ್ರಶಸ್ತಿ


ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗಲಾಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶರಣಬಸವರಾಜ ಪಾಟೀಲ್ ವ್ಯಾಕರನಾಳ ರವರಿಗೆ ಗೌರವ ಡಾಕ್ಟರೆಟ್ ಪ್ರಶಸ್ತಿ ಒಲಿದು ಬಂದಿದೆ.
ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಮತ್ತು ಏಷಿಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿ ದಿಂದ ಕೊಡ ಮಾಡಲಾಗುವ ಗೌರವ ಡಾಕ್ಟರೆಟ್ ನ್ನು ತಮಿಳುನಾಡಿನ (ಚೆನೈ)ದಲ್ಲಿ ಇದೆ ಪೆಬ್ರವರಿ 25 ರಂದು ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಗುವದು ಎಂದು ಯುನಿವರ್ಸಿಟಿಯ ಆಯ್ಕೆ ಕಮಿಟಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಎಂಬಿಎ. ಪದವಿದರಾಗಿರುವ ವ್ಯಾಕರನಾಳದ ಶರಣಬಸವರಾಜ ಪಾಟೀಲ್ ರವರು ಸದಾ ಸಮಾಜ ಸೇವೆಯಲ್ಲಿ ತಮ್ನನ್ನು ತಾವು ತೊಡಗಿಸಿಕೊಂಡವರು. ನಾಗಲಾಪೂರು ಗ್ರಾಮ ಪಂಚಾಯತಿ ವ್ಯಾಪ್ತಿ ಸೇರಿ ತಾಲೂಕಿನ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬರಿಗೂ ಸಮಾಜ ಸೇವೆಯ ಮೂಲಕ ಚಿರ ಪರಿಚಿತರಾಗಿರುವ ಇವರು ಬಡವರು ಮತ್ತು ರೈತರ ಬಗ್ಗೆ ಹೆಚ್ಚಿನ ಪ್ರೀತಿ-ಕಾಳಜಿ ಇಟ್ಟುಕೊಂಡಿರುವದು ವಿಶೇಷ. ತಮ್ಮ ಕ್ಷೇತ್ರದಲ್ಲಿ ಯಾರದೆ ಮದುವೆ ಸೆರಿ ಇನ್ನಿತರೆ ಧಾರ್ಮಿಕ  ಕಾರ್ಯಕ್ರಮ ಸೇರಿ ಯಾವುದೆ ಕಾರ್ಯಕ್ರಮ ನಡೆದರೂ ಅಲ್ಲಿ ಶರಣಬಸವರಾಜರು ಉಪಸ್ಥಿತಿ ಇದ್ದೆ ಇರುತ್ತದೆ. ಅವರ ಮನೆಯ ಕಾರ್ಯಕ್ರಮ ದಂತೆ ಎಲ್ಲರೊಂದಿಗೆ ಬೆರೆತು ತಮ್ಮ ಕೈಲಾದಷ್ಟು ಸಹಾಯ ಹಾಗೂ ಸಹಕಾರ ನೀಡಿ ಅವರ ಖುಷಿ ಯಲ್ಲಿ ತಮ್ಮ ಸಂತೋಷ ಕಾಣುವ ವ್ಯಾಕರನಾಳದ ಶರಣಬಸವರಾಜ ಪಾಟೀಲರ ವ್ಯಕ್ತಿತ್ವಕ್ಕೆ ಗೌರವ ಡಾಕ್ಟರೇಟ್ ಲಭಿಸಿದ್ದಕ್ಕೆ ನೂರಾರು ಜನರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.