ರಾಯಚೂರು (ತೆಲಂಗಾಣ) : ಪ್ರತಿಷ್ಠಾಪನೆಗೆ ತೆಗೆದುಕೊಂಡು ಬರುತ್ತಿದ್ದ ಗಣೇಶ ಮೂರ್ತಿ ಪಲ್ಟಿಯಾದ ಘಟನೆ ತೆಲಂಗಾಣದ ನಂದಿನಿ ಗ್ರಾಮದ ಬಳಿ ನಡೆದಿದೆ.
ಹೈದ್ರಾಬಾದ್ ನಿಂದ ರಾಯಚೂರಿಗೆ ತರುವ ವೇಳೆ ಗಣೇಶನ ಮೂರ್ತಿ ಕೆಳಕ್ಕೆ ಬಿದ್ದಿದೆ. ಟಿಪ್ಪರ್ ನಲ್ಲಿ ಬೃಹತ್ ಆಕಾರದ ಗಣೇಶ ಮೂರ್ತಿ ತರುವ ವೇಳೆ ದುರ್ಘಟನೆ ನಡೆದಿದ್ದು, ರಸ್ತೆಯಲ್ಲಿ ಇದ್ದ ವಯರ್ ಗಣೇಶ ಮೂರ್ತಿಗೆ ತಟ್ಟಿ ಅನಾಹುತ ನಡೆದಿದೆ. ವಯರ್ ಸರಿಪಡಿಸುವ ವೇಳೆಯೇ ಬೃಹತ್ ಗಣೇಶನ ಮೂರ್ತಿ ನೆಲಕ್ಕುರುಳಿದೆ. ಲಕ್ಷಾಂತರ ರೂ. ಮೌಲ್ಯದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುನ್ನವೇ ಹಾಳಾಗಿದ್ದು, ಗಣೇಶ ಪ್ರತಿಷ್ಠಾಪನೆ ಮಂಡಳಿ ಬೇಸರ ವ್ಯಕ್ತಪಡಿಸಿದೆ.