ರಾಯಚೂರು: ಜಿಲ್ಲೆಯ ಮುದಗಲ್ ಪಟ್ಟಣದಲ್ಲಿ ಹಾಡುಹಗಲೆ ಮನೆಯ ಚಿಲಕ ಕಿತ್ತಿ ಸುಮಾರು ಒಂಬತ್ತು ತೊಲೆ ಬಂಗಾರವನ್ನು ಕಳ್ಳರು ದೋಚಿಕೊಂಡು ಶನಿವಾರ ಹೋಗಿದ್ದಾರೆ.
ಹಳೆ ಪೇಟೆಯ ಶ್ರೀವೀರಭದ್ರೇಶ್ವರ ದೇವಸ್ಥಾನ ಪಕ್ಕದಲ್ಲಿನ ಕಿರಣಕುಮಾರ ದೊಡ್ಡಬಸಪ್ಪ ವಂದಾಲಿ ಎನ್ನುವವರ ಮನೆಯ ಬಾಗಿಲಿಗೆ ಬೆಳಗ್ಗೆ ಹತ್ತು ಗಂಟೆಗೆ ಬೀಗ ಹಾಕಿ ಹೊರಹೋಗಿದ್ದಾರೆ.ಮಧ್ಯಾಹ್ನ ಒಂದು ಗಂಟೆಗೆ ಮನೆಗೆ ಬಂದು ನೋಡಿದಾಗ ಬೀಗ ಹಾಕುವ ಚಿಲಕವನ್ನು ಸ್ಕ್ರೂ ಸಮೇತ ಕಿತ್ತಿ, ಮನೆಯಯೊಳಗ್ಗೆ ನಿಗ್ಗಿದ ಕಳ್ಳರು ಅಲಮಾರಿಯಲ್ಲಿದ್ದ ಅವಲಕ್ಕಿ ಸರ್,ಮೂಗುತಿ,ಬೆಂಡಾಲಿ ಹಾಗೂ ಬಂಗಾರದ ಹಳೆ ಸಾಮನು ಸೇರಿ ಒಟ್ಟು ಒಂಬತ್ತು ತೊಲೆ (90 ಗ್ರಾಂ) ಬಂಗಾರವನ್ನು ಕಳ್ಳರು ಕದ್ದೊಯ್ದಿದ್ದಾರೆ.
ಕಳೆದ ವಾರದ ಹಿಂದೆ ವೆಂಕಟರಾಯನಪೇಟೆ ಯಲ್ಲಿಯೂ ಇದೆ ರೀತಿ ಮನೆ ಕಳ್ಳತನವಾಗಿತ್ತು. ಇತ್ತೀಚೆಗೆ ಪಟ್ಟಣದಲ್ಲಿ ಮನೆ ಹಾಗೂ ಅಂಗಡಿಗಳ ಕಳ್ಳತನ ಪ್ರಕರಣ ಹೆಚ್ಚಾಗುತಿದ್ದು ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಬೇಕಾಗಿದೆ. ಬಡವರು ಕೂಡಿಟ್ಟ ಹಣ,ಬಂಗಾರ ಹಾಡುಹಗಲೆ ಕಳ್ಳರ ಪಾಲಾಗುತಿದ್ದು ಕಳೆದುಕೊಂಡವರು ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ.
Kalyana Voice > Crime News > ಮುದಗಲ್ ದಲ್ಲಿ ಹಾಡುಹಗಲೆ ಮನೆ ಕಳ್ಳತನ.! *ಹೆಚ್ಚುತ್ತಿವೆ ಕಳ್ಳತನ ಪ್ರಕರಣ *ಹೆಚ್ಚೆತ್ತು ಕೊಳ್ಳದ ಪೊಲೀಸ್ ಇಲಾಖೆ
ಮುದಗಲ್ ದಲ್ಲಿ ಹಾಡುಹಗಲೆ ಮನೆ ಕಳ್ಳತನ.! *ಹೆಚ್ಚುತ್ತಿವೆ ಕಳ್ಳತನ ಪ್ರಕರಣ *ಹೆಚ್ಚೆತ್ತು ಕೊಳ್ಳದ ಪೊಲೀಸ್ ಇಲಾಖೆ
Kalyana Voice23/06/2024
posted on
![](https://kalyanavoice.com/yfotimpa/2024/06/IMG-20240622-WA0305.jpg?v=1719107532)
Leave a reply