This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Local News

ಯುವ ನಾಯಕ ಬಿ.ವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿ ಯುವ ಮುಖಂಡ ಶಂಕರ್ ಬಳೆ ಆಗ್ರಹ.


ರಾಯಚೂರು ( ದೇವದುರ್ಗ ) : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ ವಿಜಯೇಂದ್ರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಶಾಸಕ ಬಿ.ವೈ ವಿಜಯೇಂದ್ರ ರಾಜ್ಯದ ಜನಪ್ರಿಯ ನಾಯಕರಾಗಿದ್ದು, ಎಲ್ಲರನ್ನು ಒಗ್ಗೂಡಿಸುವ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿಸುವ ಸಾಮರ್ಥ್ಯ ವಿಜಯೇಂದ್ರ ಅವರಿಗೆ ಇದೆ ಎಂದು ಬಿಜೆಪಿ ಯುವ ಮುಖಂಡ ಶಂಕರ್ ಬಳೆ ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯದ ಯುವ ನಾಯಕರೆಂದೇ ಬಿಂಬಿತವಾಗಿರುವ ಶಾಸಕ ಬಿ.ವೈ ವಿಜಯೇಂದ್ರ, ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ತಾಕತ್ತು ಅವರಿಗಿದೆ ಎಂದು ಈ ವೇಳೆ ಶಂಕರ್ ಬಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರರಾಗಿರುವ ವಿಜಯೇಂದ್ರ ಅವರು, ಅಪ್ಪನಂತೆ ರಾಜಕೀಯ ಚಾಣಾಕ್ಷತನ ಹೊಂದಿರುವ ನಾಯಕರಾಗಿದ್ದು, ಈ ಹಿಂದಿನ ಶಿರಾ ಹಾಗೂ ಆರ್ ಆರ್ ನಗರ ಚುನಾವಣೆ ಗೆಲ್ಲಿಸಿಕೊಂಡು ಬಂದಿದ್ದೇ ಸಾಕ್ಷಿಯಾಗಿದೆ. ಸದ್ಯಕ್ಕೆ ಶಿಕಾರಿಪುರ ಶಾಸಕರಾಗಿರುವ ಇವರು ರಾಜ್ಯ ಮಟ್ಟದ ಜವಾಬ್ದಾರಿಯಾದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ವ್ಯಕ್ತವಾಗಿದೆ.