![](https://kalyanavoice.com/yfotimpa/2023/06/20230629_063330.jpg)
ಮಳೆಯ ಅವಾಂತರದಿಂದ ವ್ಯಕ್ತಿಯೊಬ್ಬ ಹೆಚ್.ಎಫ್ ಡಿಲಕ್ಸ್ ಬೈಕ್ ನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿ ದಡ ಸೇರಿದ ಘಟನೆ ರಾಯಚೂರಿನ ಕರೇಕಲ್ ಗ್ರಾಮದ ಅಂಡರ್ ಪಾಸ್ಇ ಬಳಿ ನಡೆದಿದೆ. ರಾಯಚೂರಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಕರೆಕಲ್ ಅಂಡರ್ ಪಾಸ್ ಬಳಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿತ್ತು. ಇದ್ರಿಂದ ಕಂಗಾಲಾದ ವ್ಯಕ್ತಿಯೊಬ್ಬ ಭಾರವಾದ ಬೈಕ್ ಹೊತ್ತು ಸಾಗಿದ್ದಾನೆ. ಸದ್ಯ ಬೈಕ್ ಹೊತ್ತು ಸಾಗಿದ ಆಧುನಿಕ ಬಾಹುಬಲಿಯ ವೀಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಬೈಕ್ ಸೈಲೆನ್ಸರ್ ಮುಳುಗಡೆ ಭೀತಿಯಿಂದ ಬೈಕ್ ಹೊತ್ತು ಹರಸಾಹಸ ಮಾಡಿದ ವ್ಯಕ್ತಿ.