This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Local News

ಕ್ರೀಡಾಕೂಟದಲ್ಲಿ ಮಾರಾಮಾರಿ!?


ಮುದಗಲ್ (ರಾಯಚೂರು): ಸ್ಥಳೀಯ ಗೋಪಾಲಕೃಷ್ಣ ಪ್ರೌಢ ಶಾಲೆ ನೇತೃತ್ವದಲ್ಲಿ ಕ್ರಿಸ್ತ್ ಜ್ಯೋತಿ ಹಾಗೂ ಸೆಕ್ರೆಡ್ ಹಾರ್ಟ್ಸ್ ಪ್ರೌಢ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮುದಗಲ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಗುರುವಾರ ಗುಂಪು ಮಾರಾಮಾರಿ ನಡೆದಿದೆ.!?

ಸ್ಥಳೀಯ ಸೆಕ್ರೆಡ್ ಹಾರ್ಟ್ಸ್ ಪ್ರೌಢ ಶಾಲೆ ಮತ್ತು ವಿಸಿ.ಪಾಟೀಲ್ ಪ್ರೌಢ ಶಾಲೆ ಮಧ್ಯೆ ಮಧ್ಯಾಹ್ನ ಆರಂಭವಾಗಿದ್ದ ಕಬಡ್ಡಿ ಪಂದ್ಯದಲ್ಲಿ ಕ್ರೀಡಾಪಟು ಒಬ್ಬನಿಗೆ ಬೇರೊಬ್ಬ ಕೈ ಮಾಡಿದನು ಎಂಬ ವಿಷಯಕ್ಕೆ ಏಕಾಏಕಿ ಗಲಾಟೆ ಶುರುವಾಗಿ.

ನೂರಾರು ಯುವಕರು ಮತ್ತು ಕ್ರೀಡಾಪಟುಗಳ ಪೋಷಕರು ಕೈಕೈ ಮಿಲಾಯಿಸಿದ್ದಾರೆ. ಇದರಿಂದ ಅರ್ಧತಾಸಿಗೂ ಅಧಿಕ ಸಮಯ ಪ್ರಕ್ಷುಬ್ದ ವಾತವರಣ ನಿರ್ಮಾಣವಾಗಿತ್ತು.

ಅಲ್ಲದೆ ಕ್ರೀಡಾ ಪ್ರದರ್ಶನಕ್ಕೆ ಬಂದಿದ್ದ ವಿದ್ಯಾರ್ಥಿಗಳು ಗಾಬರಿಯಾಗಿ ಕೆಲ ಕ್ರೀಡಾಪಟುಗಳು ಜಾಗ ಖಾಲಿಮಾಡಿದರು.

ನಂತರ ಸ್ಥಳೀಯ ಪೊಲೀಸ್‌ರು ಸ್ಥಳಕ್ಕೆ ಆಗಮಿಸಿ ಕ್ರೀಡಾ ಮೈದಾನದಲ್ಲಿದ್ದ ಜನರನ್ನು ಚದುರಿಸಿ ಪುನ ಕ್ರೀಡಾಕೂಟ ನಡೆಯಲು ಅನುವು ಮಾಡಿಕೊಟ್ಟರು.

ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೆ ದೂರು ದಾಖಲಾಗಿಲ್ಲ ಎಂದು ಹೇಳಲಾಗಿದೆ.